Saturday, March 27, 2010 0 comments

ಸ್ಪೂರ್ತಿ

ಮೂಳೆ ತೊಗಲಿನ ತಡಿಕೆ, ಮೇಲೆ ಅಂಗಿಯ ಹೊದಿಕೆ,
ಸಿಂಹಿಣಿಯು ನಾಚಿತು ನಿನ್ನ ಕಟಿಯ ಕಂಡು.

ಗಾಂಡೀವ ಮರೆಯಾಗಿ ನಿನ್ನ ಹುಬ್ಬುಗಳಾಗಿ,
ಓಲಂಪಿಕ್    ರಿಂಗುಗಳು ಕಿವಿಗೆ ಲೋಲಾಕುಗಳಾಗಿ ,
ತಲೆ  ಬಾಗಿ ನಿಂತಿಹಳು ಶಿಲೆಯ  ಬಾಲೆ.

ನಾಗರದ ಮೊಟ್ಟೆಯಲಿ ವೃಶ್ಚಿಕದ  ಮರಿಯಿಂದು.
ಚೂಡಿ ,ಜೀನ್ಸು, ನೈಟಿಗಳೆಲ್ಲ ಒಣಮೈಯ ತಬ್ಬಿರಲು,
ಶ್ರೀ ಕೃಷ್ಣನೂ ಅಸಹಾಯ ಇಂದಿನ ದ್ರೌಪದಿಗೆ.

ಕೊನೆಯ ಮಾತೊಂದ ಹೇಳುವದ  ಮರೆತೆ,
ಕಡಿಮೆಯಾಗಿರಲು ಇಂದು  ಸ್ಪೂರ್ತಿಯ ಒರತೆ,
ಎಲ್ಲಿ ಹುಟ್ಟೀತು ರಸಮಯ ಕವಿತೆ?
 
;