Saturday, February 27, 2010 0 comments

ಶಾರುಖ್ ಮತ್ತು ನಾವು.


ಶಾರುಖ್ ಮತ್ತು ನಾವು ಎಷ್ಟು ಆತ್ಮೀಯರಾಗಿದ್ದೇವೆಂದರೆ, ಅವನನ್ನು ನಮ್ಮ ಕುಟುಂಬದ ಒಬ್ಬ ಸದಸ್ಯನಂತೆ ನಾವು ಅವನ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತೇವೆ.  ಅವನ ಚಿತ್ರ, ಅವನ ನಟನೆ ಚೆನ್ನಾಗಿದ್ದಲ್ಲಿ ನಮ್ಮದೇ ವಿಜಯವೆಂಬಂತೆ ಸಂಭ್ರಮಿಸುತ್ತೇವೆ. ಚಿತ್ರ ತೋಪಾದಾಗ ಏನೋ ಕಳೆದುಕೊಂಡಂತೆ ಒಂದು ಕ್ಷಣ ಉದಾಸರಾಗುತ್ತೇವೆ.ಅವನ ಹಾಡುಗಳನ್ನು ನಮ್ಮ ಮೊಬೈಲಿನಲ್ಲಿ Ringtone ಮಾಡುತ್ತೇವೆ. ಹೌದು, ಅವನೊಬ್ಬ ಅಧ್ಭುತ ನಟ, ಕಲಾವಿದ, ಸಾಹಸಿ ಮತ್ತು ಕನಸುಗಾರ. ಅವನ Dreams Unlimited, Kolkata Knight Riders ನ ಮಾಲಿಕತ್ವ ಮತ್ತು Red chillies ಕಂಪನಿಗಳು ಅವನ ಕನಸುಗಳಿಗೆ ಸಾಕ್ಷಿ. ಅವುಗಳ ಯಶಸ್ಸು ಅವನ ಸಾಹಸ ಮತ್ತು ಪರಿಶ್ರಮಕ್ಕೆ ಹಿಡಿದ ಕೈಗನ್ನಡಿ. ಹಲವಾರು ಪ್ರಶಸ್ತಿಗಳು ಅವನ ನಟನಾ ಕೌಶಲ್ಯಕ್ಕೆ ಮೆರುಗು ತಂದಿವೆ. ವೈಯಕ್ತಿಕವಾಗಿ ನಮಗೆ ಶಾರುಖ್ ಬಗ್ಗೆ ತುಂಬಾ ತಿಳಿದಿಲ್ಲವಾದರೂ, ಒಬ್ಬ ಅಸಾಮಾನ್ಯ ನಟನಾಗಿ ಅವನು ನಮ್ಮನ್ನು  ಅವನ ಅಭಿನಯಕ್ಕೆ ತಲೆದೂಗುವಂತೆ ಮಾಡಿದ್ದಾನೆ. 
ಅವನ ಖಾಸಗಿ ವಿಷಯವನ್ನೇ ನಾವು ಪರಿಗಣಿಸುವದಾದರೆ, ಶಾರುಖ್ ಯಾವತ್ತೂ ಒಬ್ಬ ಪರಿಣಿತ ರಾಜಕಾರಣಿಯಂತೆ ಗೋಚರಿಸುತ್ತಾನೆ. ಅವನು ಹಿಂದೆಯೂ  ಹಿಂದೂ ಮತ್ತು ಮುಸ್ಲಿಮರ ಮನಸನ್ನು ಸೆಳೆಯಲು ಪ್ರಯತ್ನಿಸಿದ್ದಾನೆ. ಅದಕ್ಕೆ ಉತ್ತಮ ಉದಾಹರಣೆಯೆಂದರೆ ಅವನು ಗೌರಿಯನ್ನು ಮದುವೆಯಾಗಿದ್ದು.. ಅವಳನ್ನು ಮದುವೆಯಾಗಿ ಹಿಂದೂ -ಮುಸ್ಲಿಂ ಭಾವೈಕ್ಯತೆಯನ್ನು ಎಲ್ಲರ ಹೃದಯದಲ್ಲಿ ಅಂಕಿತ ಮಾಡಿದ್ದರೂ, ಗೌರಿ, ಗೌರಿಖಾನ್ ಆದದ್ದರ ಬಗ್ಗೆ ನಾವು ಮರೆತಿದ್ದೇವೆ.ಅವನ ಇತ್ತೀಚಿನ MY NAME IS KHAN ಚಿತ್ರವನ್ನೇ ಪರಿಗಣಿಸಿದಲ್ಲಿ ಅವನ ಈ ಮುಖ ತೋರುವದರಲ್ಲಿ ಸಂಶಯವಿಲ್ಲ. 

ಇಂತಹ ಶಾರುಖ್ ತನ್ನ ಸಾರ್ವಜನಿಕ ಹೇಳಿಕೆಗಳಿಂದ ನಮ್ಮ ಮನಸ್ಸನ್ನು ಘಾಸಿಗೊಳಿಸುವದು ಸರಿಯಲ್ಲ. ಒಂದೊಮ್ಮೆ ಶೋಯಬ್ ಮಲ್ಲಿಕ್, ಈಗ ಪಾಕಿಸ್ತಾನದ ಪರವಾದ ಹೇಳಿಕೆಗಳು ಅವನ ಅಭಿಮಾನಿಗಳಾದ ನಮಗೆ ಗಾಬರಿಗೊಳಿಸಿವೆ. ಕ್ರೀಡೆ, ಸಾಹಿತ್ಯ, ಕಲೆ, ವಿಜ್ಞಾನ,ತಂತ್ರಜ್ಞಾನ,ಇವುಗಳು ಆಯಾ ದೇಶಗಳ ಪ್ರತಿಬಿಂಬ. ಸ್ವದೇಶಾಭಿಮಾನವನ್ನು ಬದಿಗಿಟ್ಟು ಆಡುವ ಯಾವುದೇ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಮತ್ತು ಕ್ರೀಡೆ ನಮಗೆ ಬೇಡ. ಅವು ನಮ್ಮ ರಾಷ್ಟ್ರದ ಹಿತಕ್ಕೆ ಮುಳ್ಳುಗಳು. 

ಇಂತಹ ಶಾರುಖ್ಗೆ  ನಮ್ಮ ಪ್ರತಾಪಸಿಂಹ ತುಂಬಾ ಮೊನಚಾಗಿ,ಅರ್ಥಬಧ್ಧ್ದವಾಗಿ ಪ್ರಶ್ನೆಗಳನ್ನು ಕೇಳಿದ್ದಾರೆ. ಎಷ್ಟೋ ದಿನಗಳ ನಂತರ ಸಿಂಹರ ಒಂದು ಉತ್ತಮ ಲೇಖನ ('ಬೆತ್ತಲೆ ಜಗತ್ತು' , ವಿಜಯ ಕರ್ನಾಟಕ ದಿ.೨೭-೦೨-೨೦೧೦) ಓದಿದ ಅನುಭವ ನನಗಾಯಿತು. ಸಿಂಹರ ಪ್ರಶ್ನೆಗಳು ಯಾವುದೇ ಒಬ್ಬ ಭಾರತೀಯನು ನಮ್ಮ ಶತ್ರುರಾಷ್ಟ್ರಗಳನ್ನು ಬೆಂಬಲಿಸಲಾರದಂತೆ ಎಚ್ಚರಿಸುತ್ತವೆ.ಯಾರೋ ಹೇಳಿದ ನೆನಪು, "ಎಲ್ಲ ಮುಸ್ಲಿಮರೆಲ್ಲ ಉಗ್ರರಲ್ಲ, ಆದರೆ ಎಲ್ಲ್ಲ ಉಗ್ರರು ಮುಸ್ಲಿಮರು, ಇದು ಕಾಕತಾಳೀಯ". ಕೊನೆಯದಾಗಿ, ಶಾರುಖ್ ಇದು ಸರಿಯೇ? 

"The Brother hood of Islam is not the universal brotherhood of a man. It is the brotherhood of muslims for muslims only"---Dr.B.R.Ambedkar (Referred By Mr.PratapSimha in his article).

* ಸಿಂಹರ ಈ ಲೇಖನ Pdf ರೂಪದಲ್ಲಿ ಲಭ್ಯವಿದ್ದು, ಓದಲು ಇಚ್ಚಿಸುವವರು download ಮಾಡಿಕೊಳ್ಳಬಹುದು. 
Download Link:http://gururaj1234.pbworks.com

Friday, February 26, 2010 1 comments

ಜಾಲ

ಮಲಿನ ಕಳೆಯುವ ಮೀನಿನ ಹೆಜ್ಜೆ ಅಳಿಸೋ ನೀರು,
ಕಾಯುವದು ಜೀವವ, ಜಟಿಲಗೊಳಿಸಿ ಭಕ್ಷ್ಯ.
ಮುಸುಕಾಗಿ ಮಸುಕು ಮಾಡುವ ನೀರಿನ ಪರಿಯ
ಅರಿವ ಜಾಣರು ಉಂಟೆ?
ಉಸಿರ ಕೊಡುವ ಮನಸಿನ ಭಾವನೆ ಬೆಳಗಿಸೋ ದೇಹ,
ಚಂಚಲಗೊಳಿಸಿ ಮನವ, ತಪ್ಪಿಸುವದು ದಿಕ್ಕ.
ಮುಸುಕಾಗಿ ಮಸುಕು ಮಾಡುವ ದೇಹದ ಪರಿಯ
ಅರಿವ ಜಾಣರು ಉಂಟೆ?
ಉಬ್ಬು ತಗ್ಗುಗಳ ಹಿಂದೆ ಮೀನಿನ ಹೆಜ್ಜೆ.
0 comments

ಮೊದಲ ಓದುಗ

ಯಾರದೋ ಕಾಮಕ್ಕೆ ಜಾರಿಣಿಯ ದೇಹವು ಬೇಕು
ಪಾಪವೋ? ಪುಣ್ಯವೋ?
ಹೆರುವ ಹಾಗಿಲ್ಲ. ಹೊರುವ ಹಾಗಿಲ್ಲ.
ಮತ್ತ್ಯಾರದೋ ಲೇಖನಿಯ ಚಪಲಕ್ಕೆ
ಮೊದಲ ಓದುಗ ನಾನು
ಧರ್ಮವೋ? ಕರ್ಮವೋ?
ಹೆರುವ ಹಾಗಿಲ್ಲ, ಹೊರುವ ಹಾಗಿಲ್ಲ.
Tuesday, February 23, 2010 1 comments

ಮಾಧ್ಯಮ ಮತ್ತು ನಾವು.

ಮಾಧ್ಯಮಗಳು ಒಂದು ಸಮಾಜದ ಅವಿಭಾಜ್ಯ ಅಂಗ,ಪ್ರತಿಬಿಂಬ ಕೂಡ ಹೌದು. ಮಾಧ್ಯಮದ ಅಗತ್ಯತೆ, ಅನಿವಾರ್ಯತೆಗಳನ್ನ ನಾವು ವಿಶ್ಲೇಷಣೆಗೆ ಒಳಪಡಿಸಬೇಕಾದ ಪರಿಸ್ಥಿತಿ ಒದಗಿಬಂದಿದ್ದು ನಾಚಿಕೆಗೇಡಿನ ಸಂಗತಿ.
ನಾವು ಶಾಲೆಯಲ್ಲಿದ್ದಾಗ ಪ್ರಾರ್ಥನೆಯ ನಂತರ ಅಂದಿನ ದಿನಪತ್ರಿಕೆ ಓದುವ ಪರಿಪಾಠವಿತ್ತು. ಇಂದಿನ ದಿನಗಳಲ್ಲಿ ಅದನ್ನು ಕೆಲವು(?) ಶಾಲೆಗಳಲ್ಲಿ ನಾವು ಕಾಣಬಹುದು. ಆದರೆ ಇದರ ಔಚಿತ್ಯದ ಬಗ್ಗೆ ಪ್ರಶ್ನಿಸಬೇಕಾಗಿ ಬಂದಿದೆ. ನಮ್ಮ ಮನೆಗಳಲ್ಲಿ ನಮ್ಮ ಹಿರಿಯರು ದಿನಪತ್ರಿಕೆ ಓದಲು ಪುಸಲಾಯಿಸುತ್ತಿದ್ದರು. ಪತ್ರಿಕೆಗಳು ಅಂದರೆ ಅವರಿಗೆ ಶ್ರೇಷ್ಠವಾಗಿ ಕಾಣುತ್ತಿದ್ದವು. ಆದರೆ ನಾವು ನಮ್ಮ ಮುಂದಿನ ಪೀಳಿಗೆಗೆ ಹೇಳಲು ನಮಗೆ ಸಾಧ್ಯವಿಲ್ಲ.
ಯಾವುದೇ ಒಂದು ಟೀವಿ (ಠೀವಿ) ಚಾನೆಲ್ಲಿನ ಎಲ್ಲಾ ಕಾರ್ಯಕ್ರಮಗಳನ್ನು ನಾವು ಒಟ್ಟಿಗೆ ಕುಳಿತು ವೀಕ್ಷಿಸುವಹಾಗಿಲ್ಲ.ಒಂದು ದಿನಪತ್ರಿಕೆಯನ್ನು ಮನೆ ಮಂದಿಯೆಲ್ಲ ಓದುವಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ನಮ್ಮ ಕಿರಿಯರಿಗೆ ಪತ್ರಿಕೆ ಓದು ಅಂತ ಹೇಳುವ ಹಾಗಿಲ್ಲ. ಯಾವುದೇ ಪತ್ರಿಕೆಯನ್ನು ತಿರುವಿ ನೋಡಿದರೂ ಅಲ್ಲಿ ನಮಗೆ ಬೇಕಾದ ಸರಕಿಗಿಂತ ಬೇಡವಾದ, ಅನವಶ್ಯಕವಾದ ಸುದ್ದಿಯನ್ನು ನಾವು ಕಾಣಬಹುದು. ಗಾಸಿಪ್ಪುಗಳು ನಮ್ಮ ಮಾಧ್ಯಮಗಳ ಅವಿಭಾಜ್ಯ ಅಂಗವಾಗಿದ್ದು ಬೇಸರದ ಸಂಗತಿ. ಕಂಗನಾ ಮತ್ತು ದಿನೋ ರವರ ಮುತ್ತಿನ ಪ್ರಸಂಗ, ತಿವಾರಿಯ ಪ್ರಣಯ ಚೇಷ್ಟೆಗಳಂತಹ ಸುದ್ದಿಗಳನ್ನೂ ರೋಚಕವಾಗಿ ಓದುಗರಿಗೆ ಉಣಬದಿಸುವದು ಸರಿಯೇ? ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳನ್ನು, ಅವರ ಕೆಸರಾಟವನ್ನುರೋಚಕ ಸಂಗತಿಯನ್ನಾಗಿಸುವದು ಯಾವ ಕ್ರಮ?
ಇಷ್ಟೆಲ್ಲಾ ನಮ್ಮ ಕಣ್ಮುಂದೆ ನಡೆಯುತ್ತಿದ್ದರೂ ನಾವ್ಯಾಕೆ ನಮ್ಮ ನರಗಳು ಸತ್ತಂತೆ , ಕಣ್ಮುಚ್ಚಿ ಬದುಕುತ್ತಿದ್ದೇವೆ? ನಮ್ಮಿಂದ ಇದನ್ನು ಸರಿಪಡಿಸಲು ಸಾಧ್ಯವಿಲ್ಲವೇ? ದಾರಿ ಯಾವುದಯ್ಯ?
ದಾರಿ ಹುಡುಕುತ್ತ ಹೊರಟರೆ ನುಉರಾರು ದಾರಿಗಳು ಕಂಡಾವು. ಕೆಲವು ಪ್ರಯತ್ನಗಳನ್ನು ನಾವು ಮಾಡಬಹುದು.ನನ್ನವಿಚಾರಧಾರೆ ತಪ್ಪಾಗಿರಲೂಬಹುದು.
೧) ಪತ್ರಿಕೆಗಳನ್ನು ಓದಿದ ಮೇಲೆ ಅವುಗಳಲ್ಲಿರುವ ಅನವಶ್ಯಕ ಸುದ್ದಿಗಳನ್ನು ಗುರುತಿಸಬೇಕು. ನಂತರ ಅವುಗಳ ಬಗ್ಗೆ ನಿಮ್ಮ ವಿಚಾರವನ್ನು ಪತ್ರಮುಖೇನ ಸಂಪಾದಕರಿಗೆ ಬರೆಯಬೇಕು.
೨) ಟಿವಿಗಳಲ್ಲಿ ಬರುವ ಅಸಮಂಜಸ ಕಾರ್ಯಕ್ರಮಗಳನ್ನು ವೀಕ್ಷಿಸುವದನ್ನು ನಿಲ್ಲಿಸಿ ಆ ಚಾನೆಲ್ಲಿನ T.R.P ಕಡಿಮೆ ಮಾಡಬೇಕು.
೩) ಮಾಧ್ಯಮಗಳ ಈ ತಪ್ಪನ್ನು ಸಾರ್ವಜನಿಕವಾಗಿ ಖಂಡಿಸಬೇಕು.
ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ.
....(ಮುಂದುವರೆಯುತ್ತದೆ)
 
;